themap.katib.in

ಹೌದು, ಅವರು ನಿಮ್ಮಲ್ಲೇ ಇದ್ದಾರೆ!

ಮುಹಮ್ಮದ್ (ಸ್ವಲ್ಪ ಲಾಹು ಅಲೈಹಿ ವಸಲ್ಲಮ್), ಜಗತ್ತಿನ ಅಷ್ಟ ದಿಕ್ಕಿನಲ್ಲೂ ಪ್ರತಿನಿಮಿಷವು ಅನುರಣಿಸುತ್ತಿರುವ ನಾಡುವಿದು. ಮುಸ್ಲಿಮರು ಅತ್ಯಂತ ಹೆಚ್ಚಾಗಿ ಸ್ಪೀಕರಿಸುವ ಹೆಸರು, ಕೆಲವರಿಗೆ ಸ್ವಂತ ಹೆಸರು ಮುಹಮ್ಮದ್ ಎಂದಿಲ್ಲ ದಿದ್ದರೂ ಅವರ ಹೆಸರಿನ ಮೊದಲು ಅದನ್ನವರು ಸೇರಿಸಿ ಕರೆಯುವುದನ್ನು ಕಾಣಬಹುದು. ಮುಹಮ್ಮದ್ ಎಂಬ ನಾನುಕ್ಕೆ ಮಾತ್ರ ಹಲವಾರು ವಿಶೇಷತೆಗಳಿವೆ. ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಪ್ರಸ್ತುತ ಹೆಸರಿಗೆ ಅತ್ಯಂತ ಶ್ರೇಷ್ಠವಾದ ಮಹತ್ವವನ್ನು ಇಸ್ಲಾಂ ಕಲ್ಪಿಸುತ್ತಿದೆ.
ಜಗತ್ತಿನಾದ್ಯಂತ ಅನೇಕಾರು ಪ್ರತಿಭಾವಂತರು, ಸಮಾಜ ಸುಧಾರಕರು, ಮೇಧಾನಿಗಳು ಕಳೆದು ಹೋಗಿದ್ದಾರೆ. ಅವರಲ್ಲಿ ಕೆಲವರ ಹೆಸರು ಮರೆಗೆ ಸರಿದು ಹೋಗಿವೆ. ಇನ್ನು ಕೆಲವರು ವರ್ಷಕ್ಕೊಮ್ಮೆ ಯಾವುದಾದರೂ ಸಮಾರಂಭಗಳಲ್ಲಿ ಸೆಮಿನಾಗರ್‌ಗಳಲ್ಲಿ ಸ್ಮರಿಸಲ್ಪಡುತ್ತಾರೆ. ಹಲವು ಮಂದಿ ಬಹುವಚನದ ಸಂಬೋಧನೆಯಿಂದಲೇ ವಂಚಿತರಾಗಿದ್ದಾರೆ. ಆದರೆ ಜಗತ್ತಿನ ಎಲ್ಲಾ ದಿಕ್ಕಿನಲ್ಲೂ ಎಲ್ಲಾ ಸಮಯವು ಅನುರಣಿಸುತ್ತಿರುವ ನಾಮವೊದಿದ್ದರೆ ಅದು ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್.ಭೂಮಿಯ ಬಹುಪಾಲು ಸ್ಥಳಗಳಲ್ಲಿ ಮುಸ್ಲಿಮರು ಬದುಕುತ್ತಿದ್ದಾರೆ. ಅಲ್ಲೆಲ್ಲಾ ಆರಾಧನೆಗೆ ಮಸೀದಿಗಳಿವೆ. ಪ್ರಸ್ತುತ ಮಸೀದಿ ಮಿನಾರಗಳಿಂದ ದಿನನಿತ್ಯ ಅಜಾನ್ ವೇಳೆ ಹತ್ತು ಬಾರಿ ಮುಹಮ್ಮದ್ ಎಂಬ ನಾಮವುಚ್ಚರಿಸಲ್ಪಡುತ್ತಿದೆ. ಬೆಳಿಗ್ಗೆ ಎದ್ದೇಳುವಾಗ ಆ ನಾಮವನ್ನು ಸುಬುಹಿ ನಲ್ಲಿ ಅಜಾನ್ ಕೇಳಿದರೆ ಬದುಕು ಸಾಗಿಸಲು ಕೆಲಸ ಕಾರ್ಯ ಗಳನ್ನು ಮಾಡುತ್ತಾ ಮಧ್ಯಾಹ್ನವಾಗುವಾಗಲೂ ಝುಹರ್ ಅಜಾನ್ ನಲ್ಲಿ ಆ ನಾಮವು ಮೊಳಗುತ್ತದೆ. ಸೂರ್ಯ ತಾಪ ತಗ್ಗಿ ಮುಸ್ಸಂಜೆಯಾಗುತ್ತಾ ಪುನಃ ಆಸರ್ ಅಜನ್ ನಲ್ಲಿ ಮುಹಮ್ಮದ್ ಎಂಬ ನಾಮದ ಉಚ್ಚಾರಣೆ, ಹಗಲಿನ ಜಂಜಾಟಗಳಿಂದ ಮುಕ್ತವಾಗಿ ಸಂಧ್ಯಾ ಸಮಯದಲ್ಲಿ ಮನೆ ಸೇರುವ ಹೊತ್ತಿಗೂ ಮಸೀದಿ ಮಿನಾರದಿಂದ ಮಗ್ರಿಬ್ ಅಜಾನ್‌ನಲ್ಲಿ ‘ಅಶ್ ಹದು ಅನ್ನ ಮುಹಮ್ಮದರಸೂಲುಲ್ಲಾಹ್, ಇನ್ನು ರಾತ್ರಿ ಆಚಾರಸೇವಿಸಲು ತಯಾರಾಗುವಾಗಲೂ ಇಶಾಲ್ ಅಜಾನ್ ನಲ್ಲಿ ಮುಹಮ್ಮದ್ ಎಂಬ ಶಬ್ದದ ಸುಂದರ ನಿನಾದದಿಂದ ಅಂತರೀಕ್ಷ ಪುಳಕಿತಗೊಳ್ಳುವ ಅವರ್ಣನೀಯ ಕ್ಷಣ. ಹೀಗೆ ನೀವು ಬದುಕಿನ ಯಾವ ರಂಗದಲ್ಲಿರುವವರಾದರೂ ‘ಮುಹಮ್ಮದ್’ ಎಂಬ ನಾಮವು ನಿಮಗೆ ಕೇಳುತ್ತಲೇ ಇರುತ್ತದೆ.ಗೋಳಾಕೃತಿಯ ಭೂಮಿಯಲ್ಲಿ ಸೂರ್ಯೋದಯ, ಸೂರ್ಯಾಸ್ತಮಾನಗಳು ನಿರಂತರ ನಡೆಯುತ್ತಲೇ ಇರುತ್ತವೆ. ನಾವು ಮುಂಜಾನೆ ಎದ್ದೇಳುವಾಗ ಭೂಮಿಯ ಇನ್ನೊಂದೆಡೆ ಸೂರ್ಯ ಮುಳುಗಿ ರಾತ್ರಿ ವೇಳೆ ನಿದ್ರೆಗೆ ಶರಣಾಗುವ ಮಂದಿಯಿದ್ದಾರೆ. ಕೆಲವರು ಮಧ್ಯಾಹ್ನದಲ್ಲಿರುವಾಗ ಇನ್ನು ಕೆಲವರು ಸಂಜೆ ವೇಳೆಯಲ್ಲಿ ಮತ್ತೂ ಕೆಲವರು ಇರುಳಿನ ಗಾಢ ನಿದ್ರೆಯಲ್ಲಿ. ಈ ರೀತಿ ಭೂಮಿಯ ನಾಲ್ಕು ಕಡೆಗಳಲ್ಲಿಯೂ ಸುಬುಹ್, ಳುಹರ್, ಆಸರ್, ಮಗ್ರಿಬ್, ಇಶಾಹ್ ಎಂಬ ಐದು ನಮಾಝಿನ ಕರೆಗಿರುವ ಅಜಾನ್ ಶಬ್ದವು ಪ್ರತಿ ನಿಮಿಷವು ಮಸೀದಿ ಮಿನಾರಗಳಿಂದ ಮೊಳಗುತ್ತಲೇ ಇರುತ್ತದೆ. ಜಗತ್ತಿನ ಚರಿತ್ರೆ ಯಲ್ಲಿ ಇದಕ್ಕೆ ಸಮಾನವಾದ ಬೇರೊಂದು ವ್ಯಕ್ತಿಯನ್ನು ಎತ್ತಿ ತೋರಿಸಲು ಸಾಧ್ಯವೇ? ಏನಾಗಿರಬಹುದು ಈ ವ್ಯಕ್ತಿಯ ವಿಶೇಷತೆ? ಇಂದಿನ ತನಕ ಚರಿತ್ರೆಯ ಸುವರ್ಣ ಪುಟಗಳಲ್ಲಿ ಪ್ರಶೋಭಿಸಿ ನಿಂತಿರುವ ಈ ಅಪ್ರತಿಮ ವ್ಯಕ್ತಿಗಿರುವ ಮಹತ್ವವಾದದೂ ಏನು? ಅನ್ವೇಷಣೆಗಿಳಿಯಬಹುದು. ಯಾರಿಗೂ ಕಲಿಯಬಹುದು. ಇಸ್ಲಾಮಿಕ್ ಹಿಸ್ಟರಿ ಅವರ ಚರಿತ್ರೆಯಿಂದ ಸಮೃದ್ಧವಾಗಿ ತೆರೆದ ಪುಸ್ತಕದಂತೆ ಜಗತ್ತಿನ ಮುಂದಿದೆ.ಅವರ ನಾಮದ ವಿಶೇಷತೆಗಳು ಎಷ್ಟು ಬರೆದರೂ ಮುಗಿಯಲಾರದು. ಇಸ್ಲಾಮಿಗೆ ಒಬ್ಬ ವ್ಯಕ್ತಿ ಹಾದು ಬರಬೇಕಾದರೆ ಆ ಮಹೋನ್ನತ ನಾಯಕರ ಹೆಸರು ಉಚ್ಚರಿಸಬೇಕಾಗಿದೆ. ಅಲ್ಲಾಹನ ಹೆಸರು ಹೇಳುವುದರ ಜೊತೆಗೆ ಮುಹಮ್ಮದ್ ಎಂಬ ಹೆಸರೂ ಬರಬೇಕು. ‘ಆಶ್‌ಹದು ಅನ್‌ಲಾ ಇಲಾಹ ಇಲ್ಲಲ್ಲಾಹ್, ವಅಶ್‌ಹದು ಅನ್ನಮುಹಮ್ಮದರಸೂಲುಲ್ಲಾಹ್’ ಒಂದು ಧರ್ಮಕ್ಕೆ ಸೇರಬೇಕಾದರೆ ಒಬ್ಬ ವ್ಯಕ್ತಿಯ ನಾಮವನ್ನು ಉಚ್ಚರಿಸಲೇಬೇಕು ಎಂಬ ಕಡ್ಡಾಯ ನಿಯಮವಿರುವುದಾದರೆ ಆ ವ್ಯಕ್ತಿಯ ಮಹಿಮೆ ಪ್ರತ್ಯೇಕ ಹೇಳಬೇಕಿಲ್ಲ ತಾನೇ? ಕೋಟಿಗಟ್ಟಲೆ ಮುಸ್ಲಿಮರು ನಿರ್ವಹಿಸುವ ಕಡ್ಡಾಯ ನಮಝಿನಲ್ಲಿ ಆ ವ್ಯಕ್ತಿಯ ಸಂಬೋಧನೆಯೊಂದಿಗೆ ಸಲಾಮ್ ಹೇಳಬೇಕು. ಅಲ್ಲಾ ಹನಿಗೆ ನಡೆಸುವ ಆರಾಧನೆಯಲ್ಲಿ ಇವರ ಹೆಸರನ್ನು ಕರೆಯಬೇಕು. ಜಗತ್ತಿನಾದ್ಯಂತವಿರುವ ಮುಸ್ಲಿಮರು ಇನ್ನೂ ಕೂಡಾ ಅವರ ಹೆಸರನ್ನು ಉಚ್ಚರಿಸುತ್ತಲೇ ಇರುವ ಮತ್ತೊಂದು ಸತ್ಕಾರ್ಮವೇ ಸ್ವಲಾತ್. ಸಲ್ಲಾ ಲ್ಲಾಹು ಅಲಾ ಮುಹಮ್ಮದ್’ ಎಂದು ದಿನನಿತ್ಯ ಮುಸ್ಲಿಮರು ಹೇಳುತ್ತಲೇ ಇರುತ್ತಾರೆ. ಪ್ರಸ್ತುತ ಸ್ವಲಾತನ್ನು ಪ್ರತಿನಿತ್ಯ ಸಾವಿರಾರು ಬಾರಿ ಹೇಳುವ ಮುಸ್ಲಿಮರೂ ಇದ್ದಾರೆ. ಹದಿನಾಲ್ಕುಶತಮಾನಗಳಿಂದ ಅವರು ಆ ಸ್ವಲಾತನ್ನು ಹೇಳುತ್ತಲೇ ಇದ್ದಾರೆ. ಅದೇ ರೀತಿ ಮುಸ್ಲಿಮರ ದೈನಂದಿನ ಕಲಿಕೆಯಲ್ಲಿ, ಪ್ರಾರ್ಥನೆಗಳಲ್ಲಿ, ವೇದಿಕೆಗಳಲ್ಲಿ, ಸಭೆಗಳಲ್ಲಿ ಮುಹಮ್ಮದ್ ಎಂಬ ಪುಣ್ಯ ನಾಮದ ಉಚ್ಛಾರವೇ ಕೇಳುತ್ತಲಿರುತ್ತದೆ.ಇಂತಹಾ ಒಬ್ಬ ಅಸಾಮಾನ್ಯ ವ್ಯಕ್ತಿಯನ್ನು ಬೇರೆಲ್ಲೂ ನಮಗೆ ಕಾಣಲು ಸಾಧ್ಯವಿಲ್ಲ. ನಾವಿರುವ ವರ್ತಮಾನ ಕಾಲದಿಂದ ಹಿಡಿದು ಹದಿನಾಲ್ಕು ಶತಮಾನಗಳ ಚರಿತ್ರೆಯುದ್ದಕ್ಕೂ ಸಂಚರಿಸಿದರೆ ಎಲ್ಲೂ ಮರಣವಿಲ್ಲದೆ ಜೀವಂತ ಜ್ವಲಿಸಿ ನಿಂತಿರುವ ಅವರ ಬದುಕು ಮತ್ತು ಆದರ್ಶಗಳನ್ನು ನಮಗೆ ಕಾಣಲು ಸಾಧ್ಯ. ಅವರ ಯಾವುದೇ ಪ್ರತಿಮೆಯಾಗಲೀ ವಿಗ್ರಹ ವಾಗಲೀ ಇಲ್ಲ. ಆದರೆ ಅವರು ಕೋಟಿಗಟ್ಟಲೆ ಮುಸಲ್ಮಾನರ ಹೃದಯಗಳಲ್ಲಿ ಸಿಂಹಾಸನ ಕಟ್ಟಿ ವಿರಾಜಮಾನರಾಗಿದ್ದಾರೆ. ಅವರ ಬಗ್ಗೆ ಚರಿತ್ರೆಯೊಂದಿಗೆ ಕೇಳಿನೋಡಿ. ಎಲ್ಲಕ್ಕೂ ಸ್ಪಷ್ಟ ಉತ್ತರವಿದೆ. ಅವರ ಬಗ್ಗೆ ಮಾತ್ರ ಬರೆದ ಪುಸ್ತಕಗಳನ್ನು ಒಂದೆಡೆ ಒಗ್ಗೂಡಿಸಿದರೆ ಅದು ಜಗತ್ತಿನ ಅತಿದೊಡ್ಡ ಗ್ರಂಥಾಲಯವಾಗಬಹುದು . ಅದು ಸೀರ, ಶಮಾಇಲ್, ಮಗಾಝಿ, ಖಸಾಇಸ್ ಕ್ರಮವಾಗಿ ಬದುಕು ಮತ್ತು ಚರಿತ್ರೆ, ಸೌಂದರ್ಯ, ಯುದ್ಧ ಸಂಬಂಧಿತ ವಿಷಯಗಳು, ವಿಶೇಷತೆಗಳು ಹೀಗೆ ವಿವಿಧ ಸ್ತರಗಳಲ್ಲಿ ಅವರ ಬಗ್ಗೆ ಸಮಗ್ರವಾಗಿ ಬರೆಯಲಾಗಿದೆ. ಅವರ ಪ್ರತಿಯೊಂದು ಹಾವಭಾವಗಳನ್ನೂ, ಕಾರ್ಯವೈಖರಿಗಳನ್ನೂ ಹೆಚ್ಚೇಕೆ ಅವರ ಬದುಕನ್ನೇ ಪೂರ್ಣವಾಗಿ ಕಂಡು ಕಲಿತು ಸ್ವಹಾಬಿಗಳು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.

ಅವರು ರಾತ್ರಿಯಲ್ಲಿ ಹೇಗೆ? ಹಗಲಿನಲ್ಲಿ ಹೇಗೆ? ಅವರ ರಹಸ್ಯಗಳೇನು? ಅವರ ಬಹಿರಂಗ ಕಾರ್ಯಗಳೇನು? ಅವರು ಮನೆಯಲ್ಲಿ ಹೇಗೆ? ಹೊರಗಿದ್ದರೆ ಹೇಗೆ? ಯುದ್ಧ ವೇಳೆಯಲ್ಲೂ ಅಲ್ಲದ ಸಂದರ್ಭದಲ್ಲೂ ಅವರು ಹೇಗಿದ್ದರು…’ ಹೀಗೆ ಎಲ್ಲವೂ ಚರಿತ್ರೆ ಯಲ್ಲಿದೆ. ಅವರ ಆರೋಗ್ಯ, ರೋಗ, ನಡೆ-ನುಡಿ, ವಾಹನ ಸವಾರಿ, ಆಹಾರ ಪಾನೀಯಗಳ ” ಸೇವನೆ, ನಾಯಕತ್ವ, ಅವರ ನಿದ್ದೆ, ಅಳು, ನಗು ಈ ರೀತಿ ಎಲ್ಲವೂ ಹೇಗಿತ್ತು ಎಂಬುದನ್ನು ಅನುಯಾಯಿಗಳು ಬರೆದಿಟ್ಟಿದ್ದಾರೆ. ಅವರ ಭಾಷಣಗಳು, ಬರಹಗಾರರು, ಸೇವಕರು, ಮಕ್ಕಳು, ದೂತರು, ಪತ್ನಿಯಂದಿರು, ಯುದ್ಧಗಳು, ವಾಹನಗಳು, ಮನೆಗಳು, ಖಡ್ಗಗಳು, ಅವರು ದಿನನಿತ್ಯ ಉಪಯೋಗಿಸುತ್ತಿದ್ದ ಉಪಕರಣಗಳು ಅದರ ಹೆಸರು ಸಹಿತ ಎಲ್ಲವೂ ಚರಿತ್ರೆಯಲ್ಲಿ ದಾಖಲುಗೊಂಡಿದೆ. ಅವರ ಬಾಲ್ಯಕಾಲ, ಮದ್ರಸ, ವಿವಾಹ, ಕುಟುಂಬ ಬದುಕು, ಅವರ ಸಂತೋಷ, ಸಂತಾಪ, ಅವರ ಮುಖ, ಕಣ್ಣು, ಕಿವಿ, ಎದೆ, ಹಲ್ಲು, ಕೈಬೆರಳು, ಉಗುರು ಹೇಗಿತ್ತು ಎಂದೂ ಕೂಡ ಚರಿತ್ರೆಯಲ್ಲಿ ಬಹಳ ಸ್ಪಷ್ಟವಾಗಿ ಕಾಣಬಹುದು. ಹೆಚ್ಚೇಕೆ ಅವರ ಗಡ್ಡ ಮತ್ತು ತಲೆಯಲ್ಲಿ ಬಿಳಿ ಬಣ್ಣಕ್ಕೆ ತಿರುಗಿದ ರೋಮವೆಷ್ಟಿತ್ತು ಎಂಬ ಮಾಹಿತಿ ಕೂಡಾ ಚರಿತ್ರೆಯಲ್ಲಿದೆ. ಪ್ರವಾದಿ ಮುಹಮ್ಮದ್ ರ ಚರಿತ್ರೆ ಮಾತ್ರವಲ್ಲ ಅವರ ಬಗ್ಗೆ ಹೇಳಿಕೊಟ್ಟ ಶಿಷ್ಯಂ ದಿರ ಚರಿತ್ರೆಗಳು ಕೂಡಾ ಬಹಳ ಸ್ಪಷ್ಟವಾಗಿ ಇಸ್ಲಾಮೀ ಚರಿತ್ರೆ ಲೋಕದಲ್ಲಿವೆ. ಅವರ ಅನುಯಾಯಿಗಳಲ್ಲಿ ಅನೇಕರ ಹೆಸರು, ಅವರ ತಂದೆ ತಾಯಂದಿರ ಹೆಸರು ಮುಸ್ಲಿಮರಿಗೆ ಕಂಠ ಪಾಠವಿದೆ. ಕೆಲವರಿಗಂತೂ ಅವರ 313 ಬದ್‌ರ್ ಶುಹದಾಗಳ ಹೆಸರು ಕೂಡಾ ಕಂಠಪಾಠವಿದೆ. ಜೊತೆಗೆ ಮುಹಮ್ಮದ್ ರ ಪ್ರತಿಯೊಂದು ಮಾತು, ಕೃತಿ, ಅಂಗೀಕಾರಗಳನ್ನು ಕೂಡಾ ಅನುಯಾಯಿಗಳಾದ ಸ್ವಹಾಬಿಗಳು ನಿಖರವಾಗಿ ಸಂಗ್ರಹಿಸಿಟ್ಟಿದ್ದಾರೆ. ಅದನ್ನು ಹದೀಸ್ ಎಂಬ ಹೆಸರಿನಿಂದ ಕರೆಯುತ್ತೇವೆ. ಇಂದು ಅವರ ಒಂದು ಹದೀಸನ್ನು ಗ್ರಂಥವೊಂದರಲ್ಲಿ ನಾವು ವಾಚಿಸುವಾಗ ಆ ಗ್ರಂಥಗಾರನಿಗೆ ಅದನ್ನು ಯಾರು ಹೇಳಿಕೊಟ್ಟರು? ಅವರಿಗೆ ಯಾರು ಹೇಳಿಕೊಟ್ಟರು? ಹೀಗೆ ಪ್ರವಾದಿರವರ ತನಕ ತಲುಪುವ ವರದಿಗಾರರ ಸ್ಪಷ್ಟ ಚಿತ್ರಣವಿದೆ. ಹಾಗೇ ಹದೀಸನ್ನು ವರದಿ ಮಾಡಿದವರಿಗೆ ‘ರಾವಿ’ ಎಂದೂ ಪ್ರವಾದಿರಿಗೆ ತಲುಪುವ ಪ್ರಸ್ತುತ ಪರಂಪರೆಯನ್ನು ಸನದ್ ಎಂದೂ ಕರೆಯುತ್ತೇವೆ. ಪ್ರವಾದಿರ ಹದೀಸ್‌ಗಳನ್ನು ಕ್ರೋಢೀಕರಿಸುವಲ್ಲಿ ಮುಹದ್ದಿಸೀನ್ ಗಳಾದ ವಿದ್ವಾಂಸರು ಬಹಳ ಸೂಕ್ಷ್ಮತೆಯನ್ನು ಪಾಲಿಸಿದ್ದಾರೆ. ಹದೀಸ್ ವರದಿ ಮಾಡುವವರಲ್ಲಿ ಸುಳ್ಳು ಗಾರರೋ, ಸುಳ್ಳು ಆರೋಪಿಸಲ್ಪಟ್ಟವರೋ, ಸೂಕ್ಷ್ಮತೆ ಕಡಿಮೆ ಇರುವವರೋ ಇರುತ್ತಿರಲಿಲ್ಲ. ಅಲ್ಲದೆ ಹದೀಸ್ ವರದಿ ಮಾಡಿದ ರಾವಿಗಳ ಬದುಕನ್ನು ಸಂಪೂರ್ಣವಾಗಿ ಜಾಲಾಡಿ ಅವರು ಯಾರು, ಹೇಗೆ? ಎಂಬುದನ್ನೆಲ್ಲಾ ಚಾಚೂ ತಪ್ಪದೆ ವಿವರಿಸಿದ್ದಾರೆ. ಹೀಗೆ ಸತ್ಯವಂತಿಕೆಯಲ್ಲೂ, ಪಾಂಡಿತ್ಯದಲ್ಲೂ ಉನ್ನತ ಮಟ್ಟದಲ್ಲಿರುವವರು ಮಾತ್ರ ವರದಿ ಮಾಡಿದ್ದನ್ನು ಸ್ವೀಕರಿಸಿ ಅದಕ್ಕೆ ಸ್ವಹಿಹದ ಹದೀಸ್‌ಗಳು ಎಂದು ಕರೆದಿದ್ದಾರೆ. ಇಷ್ಟು ನಿಖರವಾಗಿ ಯಾರೊಬ್ಬರ ಮಾತನ್ನಾದರೂ ದಾಖಲಿಸಿದ್ದನ್ನು ಚರಿತ್ರೆಯಲ್ಲಿ ಎಲ್ಲೂ ನಮಗೆ ಕಾಣಲು ಸಾಧ್ಯವಾಗುತ್ತಿಲ್ಲ. ಆಧುನಿಕ ತಂತ್ರ ಜ್ಞಾನಗಳು ಅಭಿವೃದ್ಧಿಯ ತುತ್ತ ತುದಿಯಲ್ಲಿರುವ ಇಂದು ಕೂಡಾ ಜಗತ್ತಿನ ಯಾವುದೋ ದಿಕ್ಕಿನಲ್ಲಿ ಒಬ್ಬ ರಾಷ್ಟ್ರಾಧ್ಯಕ್ಷ ಭಾಷಣ ಮಾಡುತ್ತಿದ್ದರೆ, ಅದನ್ನು ಲೈವ್ ಆಗಿ ದೂರದರ್ಶನದಲ್ಲಿ ಕಾಣುತ್ತಿದ್ದರೂ ಕೂಡಾ ನಮಗೆ ಪೂರ್ಣವಾಗಿ ನಂಬಲಾಗುತ್ತಿಲ್ಲ. ಅವನ ಪ್ರಸ್ತುತ ಪ್ರಭಾಷಣವನ್ನು ಬಿತ್ತರಿಸುವ ವಿವಿಧ ಚಾನೆಲ್‌ಗಳಲ್ಲಿ ಒಂದೇ ವೇಳೆಯಲ್ಲಿ ಒಂದು ಪ್ರಭಾಷಣವೇ ಬೇರೆ ಬೇರೆ ರೀತಿಯಲ್ಲಿ ಸಾರವಾಗುವುದನ್ನು ಕಾಣುತ್ತಿದ್ದೇವೆ. ಇದು ಇಂದಿನ ಕಥೆಯಾದರೆ ಹದಿನಾಲ್ಕು ಶತಮಾನಗಳ ಮುಂಚೆ ಬದುಕಿದ್ದ ಪ್ರವಾದಿ ವರ್ಯರ ಮಾತುಗಳನ್ನು ಇಂದು ನಾವು ಕೇಳುವಾಗ ಅದರಲ್ಲಿ ಯಾವುದೇ ಆಸ್ಪಷ್ಟತೆಯಿಲ್ಲ. ಎಲ್ಲವೂ ನಿಖರ. ಅದರ ಸರಣಿ ಅಷ್ಟೊಂದು ಭದ್ರ, ಯಾರಿಗೂ ಸಂದೇಹವಿಲ್ಲದ ಸ್ಪಷ್ಟ ಪರಂಪರೆಯಲ್ಲಿ ಹಾದು ಬಂದ ಮಾತುಗಳಿವು. ಆದ್ದರಿಂದ ಸಾವಿರದ ನಾಲ್ಕುನೂರು ವರ್ಷಗಳ ಮೊದಲಿನ ಅವರ ನುಡಿ ಮುತ್ತುಗಳನ್ನು ನಾವು ಕೇಳುವಾಗ ಅವರೇ ಇಂದು ನೇರ ನಮ್ಮ ಕಿವಿಯಲ್ಲಿ ಉಸುರಿದಂತೆ ಅನುಭವವಾಗುತ್ತದೆ. ಆದ್ಭುತವಲ್ಲವೇ ಇದು? ನಮ್ಮ ಮುಂದೆಯೇ ಅವರು ಬದುಕಿರುವಂತೆ ಭಾಸವಾಗುತ್ತದೆ. ಹೌದು ಖುರ್‌ಆನ್ ಹೇಳಿದಂತೆ. “ನಿಮ್ಮಲ್ಲಿ ಅಲ್ಲಾ ಹನ ರಸೂಲರಿದ್ದಾರೆ”.

ಇಂತಹಾ ಒಬ್ಬ ವ್ಯಕ್ತಿಯ ಬದುಕು ಮತ್ತು ಆದರ್ಶದ ಬಗ್ಗೆ ಕಲಿಯಲಿಕ್ಕಲ್ಲವೇ ಎಲ್ಲರೂ ಮುಂದೆ ಬರಬೇಕಾದುದು? ಅಜ್ಞಾನವನ್ನೇ ಬಂಡವಾಳವನ್ನಾಗಿಟ್ಟುಕೊಂಡು ವೃಥಾ ಆರೋಪಗಳನ್ನು ಬರೆಯುವುದಕ್ಕೆ ಬದಲು, ಭಾಷಣ ಬಿಗಿಯುವುದರ ಬದಲು ಆ ಪ್ರವಾದಿ ವಾರ್ಯರ ಪ್ರಕಾಶದ ಬದುಕನ್ನು ಹತ್ತಿರದಿಂದ ಕಂಡು ತಿಳಿಯಲಿಕ್ಕಲ್ಲವೇ ಯತ್ನಿಸಬೇಕಾದುದು? ಲೋಕ ಜನತೆಯಿಡೀ ಕಾಯುತ್ತಿದ್ದಂತಹಾ ನಾಯಕರವರು. ಅವರು ಚರಿತ್ರೆಯ ಯಾವುದೋ ಒಂದು ಸಮಯದಲ್ಲಿ ಯಾವುದೇ ಮುನ್ಸೂಚನೆಯಿಲ್ಲದೆ ಜನಿಸಿ ಎಂದೋ ಮರಣ ಹೊಂದಿಹೋದವರಲ್ಲ. ಬದಲು ಅವರ ಜನನಕ್ಕಿಂತ ಮೊದಲು ಇಡೀ ಜಗವೇ ಅವರನ್ನು ಕಾಯುತ್ತಿತ್ತು. ಯಹೂದಿ, ನಸಾರಗಳು ತಮ್ಮ ವೇದ ಗ್ರಂಥಗಳಲ್ಲಿ ಪ್ರಸ್ತಾಪಿಸಲ್ಪಟ್ಟ ಆ ಪ್ರವಾದಿಯ ಬಗ್ಗೆ ಕೇಳುತ್ತಲೇ ಇದ್ದರು. ಹೀಗೆ ಎಲ್ಲಾ ಜೀವ ಜಾಲಗಳು ಆಕಾಂಕ್ಷೆಯಿಂದ ಕಾಯುತ್ತಿರುವ ಹೊತ್ತಿನಲ್ಲಾಗಿತ್ತು. ಕ್ರಿ.ಶ. 571 ಏಪ್ರಿಲ್ 20ರ ರಬೀಉಲ್ ಅವ್ವಲ್ ಹನ್ನೆರಡರ ಸೋಮವಾರದ ಸುಪ್ರಭಾತದಲ್ಲಿ ಅವರ ಪುಣ್ಯ ಜನನವಾಗುವುದು. ಅದು ಅತ್ಯಂತ ಆಹ್ಲಾದದ ಸಂತೋಷದದ ದಿನವಾಗಿತ್ತು. ಇಬ್ಲಿಸ್ ಅಲ್ಲದ ಎಲ್ಲರೂ ಸಂಭ್ರಮಿಸಿದ ದಿನ, ಕವಿ ಆಹ್ಮ ದುಶವ್ ಖೀ ಹೇಳಿದಂತೆ ‘ಸನ್ಮಾರ್ಗ ದೀಪದ ಜನನವಾದಾಗ ಜಗತ್ತೇ ಪ್ರಕಾಶಮಯ. ಎಲ್ಲೆಡೆಯೇ ಮುಗುಳ್ಳಗು ಮತ್ತು ಕೀರ್ತನೆಯ ವಾತಾವರಣ, ಇಷ್ಟು ಮಾತ್ರಕ್ಕೂ ವಿಶೇಷತೆಗಳಿರುವ, ಜಗತ್ತು ಕಂಡ ಏಕೈಕ ನಾಯಕ ಪ್ರವಾದಿ ಮುಹಮ್ಮದುದ್ರಸುಲುಲ್ಲಾಹಿ ಸ್ವಲ್ಪಲ್ಲಾಹು ಅಲೈಹಿ ವಸಲ್ಲ ಮರ ಬಗ್ಗೆ ಆಳವಾಗಿ ತಿಳಿಯಲು ಎಲ್ಲರೂ ಜಾತಿ ಮತ ಬೇಧವಿಲ್ಲದೆ ಮುಂದೆ ಬರಬೇಕಿದೆ. ಅವರ ಬದುಕಿನ ಪ್ರತಿಕ್ಷಣವು ಲೋಕ ಜನತೆಗೆ ಮಾದರೀಯೋಗ್ಯವಾಗಿದೆ. ಖು‌ರ್ ಆನ್ ಹೇಳಿತು; ‘ನಿಶ್ಚಯವಾಗಿಯೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಲ್ಲಿ ನಿಮಗೆ ಉತ್ಕೃಷ್ಟ ಮಾದರಿಯಿದೆ.